Posts

Showing posts from January 8, 2021

ನೆನಪಿನ ರೈಲು

Image
ಸಾ ಗರಕ್ಕೆ ರೈಲು ಸಂಚಾರ ಪುನಃ ಆರಂಭಗೊಳ್ಳಲಿದೆ . ಎಂತಹ ಸಂತೋಷದ ಸುದ್ದಿ .. ಹೇಳಿ ಕೇಳಿ ಸಾಗರ ನನ್ನೂರು , ನನ್ನ ತವರೂರು . ಖುಷಿಪಡಲು ಸಾಕಲ್ಲವೇ ಇಂತಹದೊಂದು    ಸಿಹಿ ಸಮಾಚಾರ .      20-25 ವರ್ಷಗಳ ಹಿಂದಿನ   ವಿಷಯ ಬೆಂಗಳೂರಿನಿಂದ ಶಿವಮೊಗ್ಗೆಯವರೆಗೆ broad gauge  ರೈಲು ಸಂಚಾರದ   ವ್ಯವಸ್ಥೆ ಇತ್ತು . ಅಲ್ಲಿಂದ ಸಾಗರ , ತಾಳಗುಪ್ಪಕ್ಕೆ ಹೋಗುವವರು meter gauge   ರೈಲಿನಲ್ಲಿ ಪ್ರಯಾಣಿಸಬೇಕಿತ್ತು . ಭರಪೂರ ಜನರು ಪ್ರಯಾಣಿಸುತ್ತಿದ್ದರು ಕೂಡ . ರೈಲಿನಲ್ಲಿ ಸಂಚರಿಸುವ ನಮ್ಮ ಈ ಆಸೆಯನ್ನು ಪೂರೈಸಲು ಚಿಕ್ಕಪ್ಪ 3-4 ಬಾರಿ ನಮಗೆ ಸಾಗರದಿಂದ ತಾಳಗುಪ್ಪೆಗೆ ಕರೆದು ಕೊಂಡು ಹೋಗಿದ್ದುಂಟು . ಪ್ರಯಾಣದ ಒಂದೊಂದು ನಿಮಿಷವನ್ನು ನಾವು ಸಿಕ್ಕಾಪಟ್ಟೆ enjoy ಮಾಡುತಿದ್ದೆವು .      ಕಾಲ ಕಳೆದಂತೆ ಸಾಗರದಿಂದ ಬೆಂಗಳೂರಿಗೆ ಖಾಸಗಿ ಬಸ್ಸುಗಳ ಓಡಾಟ ಶುರುವಾಯಿತು .72 ಕಿ ಮೀ ದೂರದಶಿವಮೊಗ್ಗೆ ತಲುಪಲು ಪುಟ್ಟ ರೈಲು 3-4 ಗಂಟೆ ತೆಗೆದುಕೊಳ್ಳುತ್ತಿತ್ತು . ರೈಲ್ವೇ ಕ್ರಾಸಿಂಗ್ ಬಳಿ ಸ್ವತಃ ಗಾರ್ಡ್   ರೈಲಿಂದ ಇಳಿದು ಗೇಟ್ ಹಾಕುವುದು , ರೈಲು ಕ್ರಾಸಿಂಗ್ ದಾಟಿದ ಮೇಲೆ ಗೇಟ್   ತೆರೆಯುವುದು ಮಾಡುತ್ತಿದ್ದ , ಓಡಿ ಹೋಗಿ   ಚಲಿಸುತ್ತಿದ್ದ ರೈಲು ಹತ್ತುತ್ತಿದ್ದ !!!  ಜನರು ಈ ರೀತಿಯ   cut  journey ಗಿಂತ ಕೇವಲ 7 ಗಂಟೆಗಳಲ್ಲಿ ಬೆಂಗಳೂರ

ಹೀಗೊಂದು ಕಡುಬು ಪುರಾಣ

Image
                      ಸು ಮಾರು 10-15 ವರ್ಷಗಳ ಹಿಂದಿನ ಮಾತು.ಮಲೆನಾಡು ತವರುಮನೆಯಾದ ನನಗೆ, ಅಲ್ಲಿನ ಭೀಕರ ಮಳೆಗೆ ಯಾರಾದರೂ ನೆರೆಹೊರೆಯವರ ಮನೆಯಲ್ಲಿ ಹಲಸಿನ ಮರದ ರೆಂಬೆ ಮುರಿದು ಬಿದ್ದಾಗ ಅದರ ಎಲೆಗಳನ್ನು ತಂದು ಅಮ್ಮನಿಗೆ ಒಪ್ಪಿಸುವುದು ಅಪರೂಪದ ಕಾಯಕವಾಗಿತ್ತು. ಆ ಎಲೆಗಳನ್ನು ಸ್ವಚ್ಛವಾಗಿ ತೊಳೆದು, ಖೊಟ್ಟೆ ಹೆಣೆಯಲು ಅಣಿಮಾಡಿಕೊಡುವುದಷ್ಟಕ್ಕೆ ನನ್ನ  ಜ್ನಾನ ಸೀಮಿತವಾಗಿತ್ತು.ನನ್ನಮ್ಮ ಆ ಎಲೆಗಳನ್ನು ಬಳಸಿ ರುಚಿ-ಶುಚಿಯಾದ ಖೊಟ್ಟೆ ಕಡುಬು ತಯಾರಿಸುತ್ತಿದ್ದರು.              ಮೊನ್ನೆ ಊರಿನಲ್ಲಿರುವ  ನನ್ನಮ್ಮ ಅನಿರೀಕ್ಷಿತವಾಗಿ ಬೆಂಗಳೂರಿಗೆ ಬರುವ ಪ್ರಸಂಗ ಎದುರಾಯಿತು.ಕಾರಣಾಂತರದಿಂದ ಅಮ್ಮನಿಗೆ ನಮ್ಮ ಮನೆಗೆ ಭೇಟಿ ಕೊಡಲಾಗಲಿಲ್ಲ.ಎಷ್ಟೆಂದರೂ ಮಾತ್ರವಾತ್ಸಲ್ಯ,ನನಗಾಗಿ ಊರಿಂದ ಸ್ವಲ್ಪ ಹಲಸಿನ ಎಲೆಗಳನ್ನು ತಂದಿದ್ದರು.ಜೊತೆಗೆ ಕಡುಬು ಮಾಡಿ ತಿನ್ನಿರೆಂಬ ಆದೇಶವನ್ನೂ ಇತ್ತರು.ಪಾಪ ಧಾವಂತದಲ್ಲಿ ಅಮ್ಮ, ಕಡುಬು ಹೆಣೆಯುವ ಕಡ್ಡಿಗಳನ್ನು  ಕೊಡಲು ಮರೆತೇಬಿಟ್ಟರು.ನಾನು ತಕ್ಷಣ ಫೋನಾಯಿಸಿದಾಗ"ಏನ್ಮಾಡಕ್ಕಾಗುತ್ತೆ, ಸಲ್ಪ ಎಲೆ ಹರಿದು ಉದ್ದಿನ ಹಿಟ್ಟಿಗೆ ಬೆರೆಸಿ ಇಡ್ಲಿ ಮಾಡು, ಕಡುಬಿನ ಪರಿಮಳ ಬರುತ್ತೆ, ಕಡುಬು ತಿಂದ ಹಾಗೆ ಇರುತ್ತೆ" ಎಂದು ಸಮಾಧಾನಿಸಿದರು. ಕಡ್ಡಿಗಳಿಲ್ಲ ಎನ್ನುವ ತಲೆಬಿಸಿ ಒಂದೆಡೆ, ವಯಸ್ಸು 30 ಡಾಟಿದರೂ ಖೊಟ್ಟೆ ಹೆಣಿಯಲು ಬರೊಲ್ಲ ಎನ್ನುವ ಕೀಳರಿಮೆ ಇನ್ನೊಂದೆಡೆ."ವೈ ನಾಟ್ ನೌ" ಎನ್ನು