ನೆನಪಿನ ರೈಲು

ಸಾಗರಕ್ಕೆ ರೈಲು ಸಂಚಾರ ಪುನಃ ಆರಂಭಗೊಳ್ಳಲಿದೆ. ಎಂತಹ ಸಂತೋಷದ ಸುದ್ದಿ..ಹೇಳಿ ಕೇಳಿ ಸಾಗರ ನನ್ನೂರು, ನನ್ನ ತವರೂರು.ಖುಷಿಪಡಲು ಸಾಕಲ್ಲವೇ ಇಂತಹದೊಂದು   ಸಿಹಿ ಸಮಾಚಾರ.

    20-25 ವರ್ಷಗಳ ಹಿಂದಿನ  ವಿಷಯ ಬೆಂಗಳೂರಿನಿಂದ ಶಿವಮೊಗ್ಗೆಯವರೆಗೆ broad gauge  ರೈಲು ಸಂಚಾರದ  ವ್ಯವಸ್ಥೆ ಇತ್ತು.ಅಲ್ಲಿಂದ ಸಾಗರ, ತಾಳಗುಪ್ಪಕ್ಕೆ ಹೋಗುವವರು meter gauge  ರೈಲಿನಲ್ಲಿ ಪ್ರಯಾಣಿಸಬೇಕಿತ್ತು.ಭರಪೂರ ಜನರು ಪ್ರಯಾಣಿಸುತ್ತಿದ್ದರು ಕೂಡ. ರೈಲಿನಲ್ಲಿ ಸಂಚರಿಸುವ ನಮ್ಮ ಆಸೆಯನ್ನು ಪೂರೈಸಲು ಚಿಕ್ಕಪ್ಪ 3-4 ಬಾರಿ ನಮಗೆ ಸಾಗರದಿಂದ ತಾಳಗುಪ್ಪೆಗೆ ಕರೆದು ಕೊಂಡು ಹೋಗಿದ್ದುಂಟು. ಪ್ರಯಾಣದ ಒಂದೊಂದು ನಿಮಿಷವನ್ನು ನಾವು ಸಿಕ್ಕಾಪಟ್ಟೆ enjoy ಮಾಡುತಿದ್ದೆವು.

    ಕಾಲ ಕಳೆದಂತೆ ಸಾಗರದಿಂದ ಬೆಂಗಳೂರಿಗೆ ಖಾಸಗಿ ಬಸ್ಸುಗಳ ಓಡಾಟ ಶುರುವಾಯಿತು.72 ಕಿ ಮೀ ದೂರದಶಿವಮೊಗ್ಗೆ ತಲುಪಲು ಪುಟ್ಟ ರೈಲು 3-4 ಗಂಟೆ ತೆಗೆದುಕೊಳ್ಳುತ್ತಿತ್ತು. ರೈಲ್ವೇ ಕ್ರಾಸಿಂಗ್ ಬಳಿ ಸ್ವತಃ ಗಾರ್ಡ್  ರೈಲಿಂದ ಇಳಿದು ಗೇಟ್ ಹಾಕುವುದು , ರೈಲು ಕ್ರಾಸಿಂಗ್ ದಾಟಿದ ಮೇಲೆ ಗೇಟ್  ತೆರೆಯುವುದು ಮಾಡುತ್ತಿದ್ದ, ಓಡಿ ಹೋಗಿ  ಚಲಿಸುತ್ತಿದ್ದ ರೈಲು ಹತ್ತುತ್ತಿದ್ದ!!!  ಜನರು ರೀತಿಯ cut journeyಗಿಂತ ಕೇವಲ 7 ಗಂಟೆಗಳಲ್ಲಿ ಬೆಂಗಳೂರು ತಲುಪಿಸುವ ಬಸ್ಸುಗಳ ಮೊರೆಹೊಕ್ಕರು..7-8 ಬೋಗಿಗಳ ರೈಲು 1-2 ಬೋಗಿಗೆ ಕಟ್ ಡೌನ್ ಆಯಿತು. ದಿನ ಕಳೆದಂತೆ ಬಸ್ಸಿನಂತಹ ಪುಟಾಣಿ ರೈಲಿನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತು. ಷಿವಮೊಗ್ಗೆಯ ರೈಲ್ವೇ ನಿಲ್ದಾಣಕ್ಕೆ ಡೈರೆಕ್ಟ್ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಯಿತು.

     ನಿಲ್ದಾಣದ ಹಿಂಭಾಗದಲ್ಲಿಯೇ ನಾನು ಓದಿದ ಪ್ರಾಥಮಿಕ ಶಾಲೆಯಿತ್ತು. ನಿಲ್ದಾಣ ಮತ್ತು ಶಾಲೆಯ ಮಧ್ಯ ಭಾಗದಲ್ಲಿ ಆಟದ ಮೈದಾನವಿತ್ತು.ಮೈದಾನದ ಇಕ್ಕೆಲಗಳಲ್ಲಿ  ರೈಲ್ವೇ ಸಿಬ್ಬಂದಿಗಳ ಕ್ವಾಟರ್ಸ್. ನಮ್ಮ ಶಾಲೆ ನಿರ್ಮಾಣ ಹಂತದಲ್ಲಿ ಇದ್ದುದರಿಂದ ರೈಲ್ವೇ ಗೋಡನ್ ಕೆಲವು ಸಮಯ ನಮ್ಮ ಪಾಠದ ತರಗತಿಯಾಗಿತ್ತು. ವಿಶಾಲವಾದ ಗೋಡನ್ ಮಧ್ಯ ಒಂದು ಪರದೆ, ಒಂದು ಬದಿ 7 ನೇ ತರಗತಿಯಾದರೆ ಇನ್ನೊಂದೆಡೆ ನಾವು 4 ನೇ ತರಗತಿಯ ಚಿಲ್ಟಾರಿಗಳು.

   ನಿಲ್ದಾಣದ ಎದುರಿದ್ದ ತ್ರಿಕೋನಾಕಾರದ ಉದ್ಯಾನ ಎಲ್ಲರ ಗಮನ ಸೆಳೆಯುತ್ತಿತ್ತು.ಅಲ್ಲಿ ಬೆಳೆದಿರುವ ಬಣ್ಣ ಬಣ್ಣ ಗುಲಾಬಿ, ಗ್ಲ್ಯಾಡಿಯೋಲಸ್, ದಾಸವಾಳಗಳು ಆಕರ್ಷಕವಾಗಿದ್ದವು. ಸುತ್ತಲೂ ಮುಳ್ಳಿನ ಬೇಲಿಯನ್ನು ಹಾಕಿದ್ದರು. ಖಾಕಿ ಬಣ್ಣದ ಅಂಗಿ ಮತ್ತು ದೊಗಲವಾದ ಚಡ್ಡಿ ದರಿಸಿ, ತಲೆಗೆ ಕೆಂಪು ಬಣ್ಣದ ಮುಂಡಾಸು ಸುತ್ತಿರುವ ಮಾಲಿ ನಮಗೆ ಭಯೋತ್ಪಾದಕನಾಗಿದ್ದ.ಮನಸ್ಸು ತಡೀಲಾರದೇ ಹೂವು ಕೀಳಲು ಹೋದಾಗ ಮಾಲಿಯ ಮುಖದ ಕಲ್ಪನೆಯೇ ಬೆಚ್ಚಿ ಬೀಳಿಸುತ್ತಿತ್ತು.

   ಆಟದ ಪೀರಿಯಡ್ ನಲ್ಲಿ ಮೈದಾನದ ಅಕ್ಕ ಪಕ್ಕವಿರುವ ಮನೆಯ ಜಗಲಿಯ ಮೇಲೆ ಕಂಬದಾಟ (ಉಪ್ಪು ಬೇಕಾ ಉಪ್ಪು), ಚೀಟಿ ಆಟ ಆಡುತ್ತಿದ್ದೆವು. ಜೂಟಾಟ, ಕಣ್ಣು ಮುಚ್ಚಾಲೆ ಆಡಿ ಸುಸ್ತಾದಾಗ ಮನೆಯ ಹೆಂಗಸರು ನಮಗೆ ಕುಡಿಯಲು ಬಾವಿಯ ನೀರು ಕೊಡುತ್ತಿದ್ದರು.. ನೀರು ಸಿಹಿಯಾಗಿರುತ್ತಿತ್ತು. ಮೈದಾನದ ಮಧ್ಯದಲ್ಲಿ ಪ್ಲಾಟ್ ಫಾರಂ ತರಹದ ಒಂದು ಕಟ್ಟೆ , ಅದಕ್ಕೆ ಹೊಂದಿಕೊಂಡು ಕಟಾಂಜನ.. ಗುಡಿಯ ದೇವರು ನಾಗಪ್ಪಆಟದ ಮಧ್ಯ ದಣಿವಾರಿಸಿಕೊಳ್ಳಲು ಕಟ್ಟೆಯ ಸುತ್ತಲೂ ಕುಳಿತುಕೊಳ್ಳುತ್ತಿದ್ದೆವುಕೆಲವೊಮ್ಮೆ ಮನೆಯಲ್ಲಿ  combined study ಮಾಡುವುದಾಗಿ ಪೊಟ್ಟಣದಲ್ಲಿ ತಿಂಡಿ ಕಟ್ಟಿಕೊಂದು ಇಲ್ಲಿಗೆ ಬರುತ್ತಿದ್ದೆವು. 2-3 ಗಂಟೆಗಳ ಆಟ,ತಿಂಡಿ ಕಾರ್ಯಕ್ರಮದ ಮದ್ಯೆ 15-20 ನಿಮಿಷ ಓದು ಇರುತ್ತಿತ್ತು.ಮಾರ್ಚ್ ಏಪ್ರಿಲ್ ತಿಂಗಳಲ್ಲಿ ವೆಲ್ವೆಟ್ ಹುಳ ಹಿಡಿಯೋದು, ಅದನ್ನು ಸಾಕೋದು recreational activity ಆಗಿರುತ್ತಿತ್ತು  .ಪರೀಕ್ಷೆ ಸಮಯದಲ್ಲಿ ಕಟ್ಟೆ ನಾಗಪ್ಪನಿಗೆ ಒಂದು ನಮಸ್ಕಾರ ಹಾಕಿ, ಅಲ್ಲೇ ಬಿದ್ದಿರುತ್ತಿದ್ದ, ಮುಂಚಿನ ದಿನ ಯಾರೋ ಮುಡಿಸಿದ ಹೂಗಳನ್ನು ರಟ್ಟಿಗೆ ಸಿಕ್ಕಿಸಿಕೊಳ್ಳುತ್ತಿದ್ದೆವು.ರಸ್ತೆಯ ಮಾರ್ಗವಾಗಿ ಮನೆಗೆ ತಲುಪಲು 15 ನಿಮಿಷ ಬೇಕಾಗುತ್ತಿತ್ತು.ಅಡ್ಡ ದಾರಿಯಲ್ಲಿ ಹಳಿಗಳನ್ನು ಹಾಸಿ  ಮನೆ ಸೇರಲು 7-8 ನಿಮಿಷ ಸಾಕಿತ್ತು.ಭಯ ಹುಟ್ಟಿಸುವ ದೊಡ್ಡ ಆಲದ ಮರವೊಂದು ಮಾರ್ಗ ಮಧ್ಯದಲ್ಲಿತ್ತು. ಆಮ್ಮನ ತಾಕೀತಿನಂತೆ ಹುಣ್ಣಿಮೆ ಅಮಾವಾಸ್ಯೆಯ ದಿನಗಳಂದು  ಹಳಿಯ ಹಾದಿ ಬಳಸುವ ಹಾಗಿರಲಿಲ್ಲ. ಏಕೆಂದರೆ ದಿನ ಮೋಹಿನಿ, ಭೂತ ಪಿಶಾಚಿಗಳಿಗೆ  ನಾರ್ಮಲ್ ಶೆಡ್ಯೂಲ್ ಜೊತೆರ್ಗೆ  ಡೇ ಡ್ಯೂಟಿ ಇರುತ್ತಿತ್ತು ಅನ್ನೋ ನಂಬಿಕೆ.ಆವತ್ತು ಮರದ ಕಡೆ ನೋಡಲೂ ಹೆದರಿಕೆಯಾಗುತ್ತಿತ್ತು.

Google Image 

     ಇದೆಲ್ಲ ನಡೆದು ಇಂದಿಗೆ 20 ವರ್ಷಗಳಾಗಿವೆ. ಕಳೆದ ಮೇ ತಿಂಗಳಲ್ಲಿ ಸಾಗರಕ್ಕೆ ಹೋದಾಗ  ಜೀರ್ಣೋದ್ದಾರಗೊಂಡ ರೈಲ್ವೇ ನಿಲ್ದಾಣ, ಹೊಸದಾಗಿ ಜೋಡಿಸಲ್ಪಟ್ಟ ಮೀಟರ್ ಗೇಜ್ ಹಳಿಗಳನ್ನು ನೋಡುವ ಆಸೆಯಾಯಿತು .ಸಂಜೆ 5 ಗಂಟೆಗೆ ನಾನು, ನನ್ನ ಅಕ್ಕ ನಮ್ಮ ಮಕ್ಕಳೊಂದಿಗೆ ಹಳಿ ಮಾರ್ಗವಾಗಿಯೇ ಅಲ್ಲೆಗೆ ತಲುಪಿದೆವು.. “ಸಾಗರ ಜಂಬಗಾರುಎಂಬ ಫಲಕ ಆಕರ್ಷಕವಾಗಿ ಕಂಡಿತು. ಬ್ರಿಟಿಷ್ ಶೈಲಿಯಲ್ಲಿದ್ದ ಕಟ್ಟಡ ಪ್ಲಾಸ್ಟರಿಂಗ್, ಸುಣ್ಣ ಬಣ್ಣ ಗಳೊಂದಿಗೆ ಕಂಗೊಳಿಸುತ್ತಿತ್ತುನಿಲ್ದಾಣದ ಮೂಲ ಸ್ವರೂಪ ಚೂರೂ ಬದಲಾಗಿರಲಿಲ್ಲ.ಮೈದಾನದ ಕಟ್ಟೆ ನಾಗಪ್ಪನೂ ಅಲಂಕೃತನಾಗಿದ್ದಮಾಲಿಗಳ್ಯಾರೂ ಕಾಣಲಿಲ್ಲ, ಕಾರಣ ತ್ರಿಕೋನಾಕಾರದ   ಉದ್ಯಾನ ನೆಲಸಮವಾಗಿತ್ತುಶಾಲೆ ಎಂದಿನಂತೆ  ಸುಂದರವಾಗಿ ಕಾಣುತ್ತಿತ್ತು.

    ಸಲದ ಮೇ ರಜದಲ್ಲಾದರೂ ಇಲ್ಲಿಂದ  ಸಾಗರಕ್ಕೆ ರೈಲಲ್ಲಿ  ಪ್ರಯಾಣಿಸಬಹುದೆಂದು ಆಸೆ ಇಟ್ಟುಕೊಂಡಿದ್ದೇನೆ. ಸಾಗರ ಸ್ಟೇಶನ್ ನಲ್ಲಿ ನಿಂತು'ಕೂಯ್ಅಂದರೆ ಅಪ್ಪ ಮಗಳನ್ನು ಬರಮಾಡಿಕೊಳ್ಳಲು ಬರುತ್ತಾರೆ, ದಿನಗಳ ನಿರೀಕ್ಷೆಯಲ್ಲಿದ್ದೇನೆ...


( ಡಿಸೆಂಬರ್ 2012 ರಲ್ಲಿ ಬರೆದದ್ದು)




 

                                         

















         


 

 

 

 

  

Popular posts from this blog

ಮನೆಪಾಠ

ಅಜ್ಜನ ನೆನಪು

ಒಂದು ತಂಬಿಟ್ಟಿನ ಕತೆ